Friday, April 27, 2012

ಮೂಕ ವೇದನೆಯ ಕರಿ ನೆರಳು




ಭಾರವಾಗುತಿದೆ ಈ ಹೃದಯಾ ಜೀವದಾ ಜೀವ  ಕಣ್ಮರೆಯಾದಾಗ 
ದೂರವಾಗುತಿವೆ ಮನಸು ಮನಸುಗಳ ಮೌನದಾ ಮಾತುಗಳು 
ಅರಿಯದೆ ಕಣ್ಣಂಚಲಿ ಕಾಡುವುದು ಮೂಕ ವೇದನೆಯ ಕರಿ ನೆರಳು  
ಮನದ ಮಂದಿರದ  ಕದ ತಟ್ಟದೆ ಭಾವಾಂತರಾಳದಲಿ ಮುಡಿದಾ ಪ್ರೀತಿ  
ಬಡಿಸೇಯಾ ಗೆಳತಿ  ಒಲವಿನಾ ಸುಧೆಯಾ ನೊಂದ ಈ  ಜೀವಕೆ .....


Tuesday, April 24, 2012

ಅಹಂಕಾರದ ಪರೆಯ ತೆರೆದು


ದೀಪ ತಾ ಹೊತ್ತಿ ಉರಿದರು ಮಂದಹಾಸದಿ ಬೆಳಕ  ಚೆಲ್ಲುವುದು ಲೋಕಕೆಲ್ಲಾ 
ಇರುಳಿನಾ ಭಯವಿಲ್ಲ ,ನಿಸ್ವಾರ್ಥದ ನಿಷ್ಕಲ್ಮಶ  ಪಾವಿತ್ರತೆಯ ಸಾಂಕೇತವದು
ಕತ್ತಲ ಪರಿವೆ ಇಲ್ಲದೆ ತನ್ನ ಮೈಯ್ಯ ಸುಟ್ಟು ಅಂದಕಾರವ ಮೆಟ್ಟಿ ನಿಲುವುದು 
ಸಂತಸದಿ  ದಾರೆಯೇರೆವುದು ತನ್ನಯ ಜೀವವ ಪರರ ಜೀವಕೆ ಜೀವವಾಗಿ
ಬೆಳಗು ನೀ ನಂದಾದೀಪವಾಗಿ  ಮನದ   ಅಹಂಕಾರದ ಪರೆಯ ತೆರೆದು .....


 


Tuesday, April 3, 2012

ಆಂತರ್ಯದ ಪ್ರೀತಿ ....♥♥


ನಿನ್ನಯ ಕಣ್ಣಂಚಿನ ಕುಡಿನೋಟಕೆ ಸೋತಿದೆ ನನ್ನೀ ಮನ 
ಭಾವಾಂತರಾಳದಿ ಮೂಡಿದೆ  ಏನೋ ಪ್ರೀತಿಯ ಹೊಸ ಭಾವ   
ಒಲವಿನ  ಮಿಡಿತ   ಹೇಳಬಯಸಿದೆ ಏನನ್ನೋ  ನಿನ್ನಲ್ಲಿ 
ಮರೆಯಾಗುತಿದೆ  ಮನದಾಳದ ಮಾತು ಮೌನದಾ  ಹಿಂದೆ
ನೋಡಲಾರೆಯಾ  ಗೆಳತಿ ಒಮ್ಮೆ ಹೃದಯದಾ ಕಣ್ತೆರೆದು
ಅರ್ಥವಾದಿತೂ  ನಿನಗೆ ನನ್ನಯ  . ಆಂತರ್ಯದ  ಪ್ರೀತಿ ....♥♥


Saturday, March 31, 2012

ದೂರ ತೀರದ ಯಾನಕೆ


ನೆನಪೆಂಬ ಹೃದಯದಲಿ ಭಾಂದವ್ಯದ ಕನಸುಗಳು ಮರೆಯಾಗುವ ಮುನ್ನಾ
ಸೇರುವಾಸೆ  ಮಧುರ ಜೀವನದ  ಪ್ರೀತಿಯ ದೂರ  ತೀರದ ಯಾನಕೆ
ಮೌನದ ಮಾತು ಅವಿತಿಹುದು ಅಂತರಾಳದಲಿ ಅರುಹಲು ಬಚ್ಚಿಟ್ಟ ಪ್ರೀತಿಯ 
ಬಯಸುತಿದೆ ನಿದ್ರಿಸಲು ನಿನ್ನೆದೆಗೊರಗಿ  ನನ್ನಯಾ  ಮುಗ್ಧ  ಮನವಿಂದು
ಸಿಗುವುದೇ ಗೆಳತಿ ನಿನ್ನಯಾ ಪ್ರೀತಿ ಕಮರಿದಾ ಈ ಬಾಳ ಪಯಣಕೆ .....?? 


Monday, March 5, 2012

ಮನದ ವೇದನೆ



ಅರಿಯದೆ ನೀ ಬರೆದೆ ನಿನ್ನ ಹೆಸರ ನನ್ನ ಉಸಿರ ಮಿಡಿತದಲ್ಲಿ
ಅನುಕ್ಷಣವು ನೆನೆನೆನೆದು ಹೃದಯವು ಕೋಗಿ ಕರೆಯುತಿದೆ ನಿನ್ನಾ
ತುಂತುರು ಮಳೆಯ ಹನಿಯಲ್ಲಿ ಕೂತು ಕಂಬನಿ ಸುರಿದಿವೆ ಕಣ್ಗಳು
ಭಾವನೆಯ ಅಂತರಾಳದಲಿ ಮನದ ವೇದನೆಯು ಹೊಯ್ದಾದುತಿದೆ
ಜಾರುತಿದೆ ಜೀವನವು ನೆನಪುಗಳ ಅಲೆಗಳ ನಡುವೆ ತೇಲುತಾ
ಬರುವೆಯಾ ಗೆಳತಿ ಬಾಡಿದಾ ಜೀವಕೆ ಹೊಸ ಚಿಗುರ ತುಂಬಲು ....?




Thursday, February 16, 2012

ಒಮ್ಮೆ ನೋಡು ಬಾ ಗೆಳತಿ....




ಕಣ್ಮುಚ್ಚಿ ಕುಳಿತರು ಅರಿವಿಲ್ಲದೆ ಮೂಡುವುದು ನಿನ್ನದೇ ಛಾಯೆ 


ದೊರವಾದರು ಕಾಡುವುದು ನಿನ್ನದೇ ನೆನಪುಗಳ ಸಾಲು ಸಾಲು 


ಏಕೋ ಏನೋ ನಿಂತಲ್ಲೇ ನಿಲುತಿಲ್ಲ ನನ್ನಯಾ ಮನವಿಂದು 


ಮಿಡಿಯುತಿದೆ ಹೊಸ ಹೊಸ ಭಾವಗಳು ಮುದ್ದಾದ ಹೃದಯದಲ್ಲಿ


ಹೇ ಒಲವೇ ಹೇಳುತಿದೆ ನನ್ನೀ ಮನವು ಇಲ್ಲೇ ನಿ ಇರುವೆ ಎಂದು 


ಕಣ್ತೆರೆದು ಒಮ್ಮೆ ನೋಡು ಬಾ ಗೆಳತಿ ನನ್ನೊಳಗೆ ನಿನ್ನಾ 


ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದು ....!!










Monday, February 13, 2012

ಮನಸ್ಸಿನ ಭಾವನೆಗಳೆ ಈ ಕವನ..!!!


ಇದ್ದೆ ನಾ ತೇಲುತಾ ನೆನಪುಗಳ ಅಲೆಯಲ್ಲಿ ದಡದ ಬರುವಿಕೆಗಾಗಿ              
ಅರಿಯದೆ ಕಾಡುವಾ ನೆನಪು ಮರೆಸಿ ನೀ ತಂದೆ ಸಿಹಿ ಪ್ರೀತಿ ಎದೆಯಲಿ      
ಜೀವದಾ  ಜೀವಕೆ ಉಸಿರ ಎರೆದು ಹೊಸ ಭಾವದ ಮಿಡಿತ ನೀನಾದೆ          
ಬರುವೆಯಾ ಎನ್ನ ಮನದ ಮಂದಿರವ ಬೆಳಗುವ ಜ್ಯೋತಿಯಾಗಿ ನೀ      
ಓ ಒಲವೇ ನಿನಗೆ ನಿವೇದಿಸಲಾಗದ ನನ್ನ ಮನಸ್ಸಿನ ಭಾವನೆಗಳೆ ಈ  ಕವನ..!!!