Wednesday, September 17, 2014

!!......ನೆನಪು ......!!

ಇಂದೇಕೋ ನಾನರಿಯೇ
ಭಾವನೆಯ ಕಾರ್ಮೋಡ ಒಡೆದು
ಯಾತನೆಯ ಮಿಂಚು ಹರಿದು
ನಿನ್ನಯಾ
ನೆನಪಿನ ತುಂತುರು
ಮಳೆ ಹನಿಯಲ್ಲಿ
ನನ್ನೀ ಮನವು
ಮಿಂದೆದ್ದು
ಹೃದಯದಂಗಳದಲ್ಲಿ
ಸವಿ ನೆನಪಿನ  ಕಾಮನ ಬಿಲ್ಲ
ಚಿತ್ತಾರದ ರಂಗೋಲಿಯ ಗೀಚಿ
ಕಂಡು ಕಾಣದಂತೆ
ಭಾವಾಂತರಾಳದಲ್ಲಿ
ಕರಗಿ ಹೋದೆ ಯಾಕೆ
ಓ ನನ್ನ ಗೆಳತೀ ....!

No comments:

Post a Comment